Vaibhava Lakshmi Vrita - ವೈಭವ ಲಕ್ಷ್ಮಿ ವ್ರತ

ಪ್ರಸನ್ನ ವೈಭವ ಲಕ್ಷ್ಮಿ
 
ಶ್ರೀ ಪ್ರಸನ್ನ ವೈಭವ ಲಕ್ಷ್ಮೀ ವ್ರತ ಹಾಗೂ ಪೂಜಾ ವಿಧಾನ
(ಪೂಜಾ ವಿಧಾನ, ನಿಯಮ, ಕ್ರಮ ಹಾಗೂ ಮಹಿಮೆಗಳನ್ನೊಳಗೊಂಡಿದೆ)

ಪ್ರಕಾಶಕರು :
ಶ್ರೀ ಸರಸ್ವತೀ ರತ್ನಾಕರ ಬುಕ್ ಡಿಪೋ
618, ರಾಜೇಶ್ವರಿ ಮಾರ್ಕೆಟ್, ಅವೆನ್ಯೂ ರಸ್ತೆ, ಬೆಂಗಳೂರು-560 002
ಫೋನ್ : 2262303

ಶ್ರೀ ಪ್ರಸನ್ನ ವೈಭವಲಕ್ಷ್ಮೀ ಪೂಜಾವಿಧಾನ 

ಜಗನ್ಮಾತೆಯೂ, ಮೂಲ ಪ್ರಕೃತಿಯ ಸ್ವರೂಪಿಣಿಯೂ, ಧನ-ಧಾನ್ಯ ಸಂಪತ್ತುಗಳನ್ನು ಕರುಣಿಸುವ ಐಶ್ವರ್ಯ ಅಧಿದೇವತೆಯಾದ ಶ್ರೀ ಮಹಾಲಕ್ಷ್ಮಿಯ ಪೂಜೆ ವೇದ ಕಾಲದಿಂದಲೂ ನಡೆದು ಬಂದಿದೆ. ಶ್ರೀಸೂಕ್ತವೂ ಲಕ್ಷ್ಮಿಯನ್ನು ಹಿರಣ್ಯವರ್ಣಾ ಎಂದೇ ಬಣ್ಣಿಸುತ್ತದೆ. ದಿವ್ಯ ತೇಜೋಮಯವಾದ ಶರೀರದ, ಸಕಲ ಸೌಭಾಗ್ಯ ದೇವತೆಯಾದ ಶ್ರೀ ಮಹಾಲಕ್ಷ್ಮಿಯ ರೂಪ ನಾಮಗಳು ಹಲವು.

ಈ ಮಹಾಲಕ್ಷ್ಮಿಯ ಅನುಗ್ರಹವಿಲ್ಲದೆ ಜೀವನ ಸುಖಮಯವಾಗಲಾರದು. ಆದ್ದರಿಂದಲೇ ಹಿರಿಯರು “ಅರ್ಥಾ: ಬಹಿಶ್ವರಾ ಪ್ರಾಣಾಃ” ಎಂದರೆ ಹಣವು ನಮ್ಮ ಶರೀರದ ಹೊರಗೆ ತಿರುಗಾಡುವ ಪ್ರಾಣ ಎಂದಿದ್ದಾರೆ. ಹಣವಿಲ್ಲದವನ ಬಾಳು ತುಂಬ ಕಷ್ಟಕರ. ಈಗಿನ ಕಾಲದಲ್ಲಂತೂ ಹಣವಿಲ್ಲದೆ ಅರೆ ಘಳಿಗೆಯೂ ಬದುಕು ಸಾಗಿಸುವುದು ಕಷ್ಟ. ಹೀಗಾಗಿ ಎಲ್ಲರಿಗೂ ನಾವು ಹಣಗಳಿಸೋಣ, ಸ್ಥಿತಿವಂತರಾಗೋಣ, ಎಂಬ ಬಯಕೆ ತುಂಬಾ ಸಹಜವಾಗಿರುತ್ತದೆ.

ಹಣವೇ ಜೀವನದ ಸರ್ವಸ್ವವಲ್ಲ; ಆದರೆ ಹಣವಿಲ್ಲದ ಬಾಳು ದುರ್ಭರವಾಗುತ್ತದೆ. ಹಣವನ್ನು ಒಳ್ಳೆಯ ರೀತಿ ಸಂಪಾದನೆ ಮಾಡಿ ಸದ್ವಿನಿಯೋಗ ಮಾಡಿದರೆ ಬಾಳು ಸಾರ್ಥಕವಾಗಬಲ್ಲದು. ಇದಕ್ಕೆ ದೈವ ಕೃಪೆ ಅಗತ್ಯವಾದುದು. ಅದೃಷ್ಟವು ಭಗವಂತನ ಕೃಪೆಯೇ ಆಗಿದೆ. ಹಣವನ್ನು ಮಹಾಲಕ್ಷ್ಮಿಯ ಚಲಿಸುವ ರೂಪ ಎನ್ನಬಹುದು. 

ಧನ-ಧಾನ್ಯ, ಪಶು ಸಂಪದಗಳನ್ನು ನೀಡಿ ಭಕ್ತರನ್ನು ಅನುಗ್ರಹಿಸುವ ದಾಯಾಮಾತೆಯಾದ ಮಹಾಲಕ್ಷ್ಮಿಯ ಪೂಜಾ ವಿಧಾನದಲ್ಲಿ ವೈವಿಧ್ಯತೆ ಇದೆ. ಶ್ರೀಸೂಕ್ತ, ಭೂಸೂಕ್ತ, ಭಾಗ್ಯಸೂಕ್ತಗಳು - ವೈದಿಕ ಸಂಪ್ರದಾಯದ ಪೂಜೆಯಾದರೆ, ಸ್ತೋತ್ರ, ಕವಚ ಅಷ್ಟೋತ್ತರ ಶತನಾಮ, ಸಹಸ್ರನಾಮ ಮತ್ತು ಲಕ್ಷ್ಮೀ ಹೃದಯಗಳು ಪುರಾಣೋಕ್ತವಾಗಿವೆ.
ವೇದ, ಪುರಾಣ, ಸಂಹಿತೆಗಳಲ್ಲಿ ಹೇಳಿರುವ ಲಕ್ಷ್ಮೀ ಪೂಜಾ ಪದ್ದತಿ, ವಿಧಾನವು ಸರಳವೇ ಆದರೂ ಪ್ರಸ್ತುತ ಆಧುನಿಕ ಜಗತ್ತಿನಲ್ಲಿ ಎಲ್ಲರ ಕೈಗೂ ಎಟಕುವಂತಹುದಲ್ಲ. ಹೀಗಾಗಿ ಮಹಾಲಕ್ಷ್ಮಿಯ ಚಿತ್ರಪಟಕ್ಕೆ ಹೂ, ಅರಿಶಿನ, ಕುಂಕುಮ ಅರ್ಪಿಸಿ, ಧೂಪವನ್ನು ಬೆಳಗುವುದಷ್ಟೇ ಇಂದಿನ ಭಕ್ತರ ಸತ್ಸಂಪ್ರದಾಯವಾಗಿದೆ. 

ಶ್ರೀ ಮಹಾಲಕ್ಷ್ಮಿಯ ಆರಾಧನೆಯಲ್ಲಿ ಸರಳವೂ ಶ್ರೇಷ್ಠವೂ ಬಹುಬೇಗ ಫಲವನ್ನು ನೀಡುವ ಪೂಜಾ ವಿಧಾನವೇ "ಶ್ರೀ ವೈಭವಲಕ್ಷ್ಮೀ ಪೂಜೆ" ಎನಿಸಿಕೊಂಡಿದೆ. ಈ ಪೂಜಾ ವಿಧಾನದಲ್ಲಿ ಇತರ ವ್ರತಗಳಂತೆ ಕಟ್ಟುನಿಟ್ಟಾದ ಸಂಪ್ರದಾಯಗಳಿಲ್ಲ. ಮಡಿಯ ಗಾಭರಿಯಿಲ್ಲ. 

ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದು ಕುಟುಂಬದಲ್ಲಿಯೂ ಹಣದ ಮುಗ್ಗಟ್ಟು ಸಹಜವಾಗಿದೆ. ಗಳಿಸುವುದಕ್ಕಿಂತ ಖರ್ಚು ಹೆಚ್ಚಾಗಿದೆ. ಚಿಂತಾಗ್ರಸ್ತ ಮುಖಗಳನ್ನು ಎಲ್ಲೆಲ್ಲೂ ನೋಡಬಹುದಾಗಿದೆ. 

ಪ್ರತಿ ಮನೆಯ ಗೃಹಿಣಿಯೂ ಆ ಮನೆಯ ಲಕ್ಷ್ಮಿ ಎನಿಸಿಕೊಳ್ಳುತ್ತಾಳೆ. ಆಕೆಯು ಪ್ರಸನ್ನಳಾಗಿದ್ದರೆ ಮನೆಯು ಮನೆಯು ಸುಖದ ಸಾಗರವಾಗುತ್ತದೆ. ಇಲ್ಲದಿದ್ದರೆ ಬದುಕೇ ಜಂಜಾಟವಾಗುತ್ತದೆ. ಇಂತಹ ಪರಿಸ್ಥಿತಿಗಳಲ್ಲಿ ಅದೃಷ್ಟರೂಪಿಣಿಯೂ ಸುಖ-ಸಂಪತ್ತುಗಳನ್ನು ಕೊಡುವ ಅಧಿದೇವತೆಯೂ ಆದ ಶ್ರೀ ಮಹಾಲಕ್ಷ್ಮಿಯ ಪ್ರಾರ್ಥನೆಯೇ ಸುಖ ಸಂಪತ್ತಿನ ಪ್ರಾಪ್ತಿಗೆ ಏಕೈಕ ಹಾಗೂ ಸುಲಭೋಪಾಯವಾಗಿದೆ.

ಪೂಜಾ ನಿಯಮಗಳು
"ಪ್ರಸನ್ನ ವೈಭವ ಲಕ್ಷ್ಮೀ ಪೂಜೆ"ಯನ್ನು ಆಚರಿಸುವುದು ತುಂಬಾ ಸರಳವಾಗಿದೆ ಇದನ್ನು ಯಾರು ಬೇಕಾದರೂ ಆಚರಿಸಬಹುದು. ಮುಖ್ಯವಾಗಿ ಮುತ್ತೈದೆಯರೇ ಈ ಪೂಜೆಯನ್ನು ಮಾಡಿದರೂ, ಬಾಲಕ ಬಾಲಕಿಯರು, ಪುರುಷರೂ ಸಹ ಇದನ್ನು ಶ್ರದ್ಧಾಭಕ್ತಿಗಳಿಂದ ನೆರವೇರಿಸಬಹುದು.

ಪೂಜಾ ವಿಧಾನ
    1. ಪ್ರತಿ ಶುಕ್ರ ವಾರ ಸಾಯಂಕಾಲದ ಗೋಧೂಳಿ ಸಮಯ (ಅಂದರೆ ಗೋವುಗಳು ಮನೆಗೆ ಬರುವ ಹೊತ್ತು) ಸಂಜೆ 5-30 ರಿಂದ 6-30ರೊಳಗೆ ಲಕ್ಷ್ಮೀಪೂಜೆಯನ್ನು ಮಾಡಬೇಕು.

    2. ಶುಕ್ರವಾರ ಸಂಜೆ ಲಕ್ಷ್ಮೀದೇವಿಯ ಭಾವಚಿತ್ರದ ಮುಂದೆ ಸಾರಿಸಿ, ಈ ಪುಸ್ತಕದಲ್ಲಿ ಕೊಟ್ಟಿರುವ ರಂಗವಲ್ಲಿ (ಚಕ್ರ)ಯನ್ನು ಹಾಕಿ ಒಂದು ಜೊತೆ ದೀಪಗಳನ್ನು ಹಚ್ಚಿಡಬೇಕು.

    3. ದೇವರ ಮುಂದೆ ಸ್ತ್ರೀಯರು ತಮ್ಮ ಚಿನ್ನದ ಆಭರಣಗಳನ್ನು (ಸರ, ಓಲೆ, ಉಂಗುರ ಇತ್ಯಾದಿ) ಸಣ್ಣ ಬಟ್ಟಲು ಅಥವಾ ಕಲಶಪಾತ್ರೆಯಲ್ಲಿರಿಸಬೇಕು.

    4. ಈ ಪಾತ್ರೆಗೆ ಅರಿಶಿನ, ಕುಂಕುಮ ಹಾಗೂ ಕೆಂಪು ಹೂಗಳಿಂದ ಅಲಂಕರಿಸಬೇಕು.

    5. ಗಜಲಕ್ಷಿಯ ಮುಂದೆ ಇರಿಸಿದ ಈ ಪಾತ್ರೆಯನ್ನೇ ಲಕ್ಷ್ಮಿ ಸಾನಿಧ್ಯವೆಂದು ಭಾವಿಸಿ ಗಂಧದ ಕಡ್ಡಿಯನ್ನು ಹಚ್ಚಿ ಏನಾದರೂ ಸಿಹಿ ಪದಾರ್ಥವನ್ನು ನೈವೇದ್ಯವಾಗಿ ಅರ್ಪಿಸಬೇಕು.

    6. ಮಹಾನೈವೇದ್ಯದ ನಂತರ ಪ್ರಸಾದವನ್ನು ಮನೆಯ ಎಲ್ಲ ಸದಸ್ಯರೂ ಕೈಕಾಲು ತೊಳೆದು ಭಕ್ತಿಯಿಂದ ಕೈ ಮುಗಿದು ಸೇವಿಸಬೇಕು. ನಂತರ ಭೋಜನ ಮಾಡಬಹುದು. ಭೋಜನದ ನಂತರ ಪೂಜೆಗೆ ಇರಿಸಿದ ಒಡವೆಗಳನ್ನು ಸ್ವಲ್ಪಕಾಲ ಧರಿಸಿ ನಂತರ ತೆಗೆದಿಡಬಹುದು. 

ಹೀಗೆ ಪ್ರಸನ್ನ ವೈಭವ ಲಕ್ಷ್ಮಿಯ ಪೂಜಾ ವಿಧಾನ ತುಂಬ ಸರಳ ಹಾಗೂ ಮಹತ್ವದ್ದಾಗಿದೆ. ಈ ಪೂಜೆಯನ್ನು ಪ್ರತಿ ಶುಕ್ರವಾರ ಭಕ್ತಿ-ಶ್ರದ್ಧೆಗಳಿಂದ ಆಚರಿಸಿದರೆ ಮಹಾಲಕ್ಷ್ಮಿಯು ಶಾಶ್ವತವಾಗಿ ಆ ಮನೆಯಲ್ಲಿ ನೆಲೆಸುವಂತಾಗುತ್ತದೆ. ಶ್ರದ್ದೆ ಮಾತ್ರ ಬಹಳ ಮುಖ್ಯವಾದುದು.

ಈ ಪೂಜೆಯನ್ನು ಮಾಡುವುದರಿಂದ ಕೆಲವರಿಗೆ ತಕ್ಷಣ ಫಲ ದೊರೆತರೆ, ಇನ್ನು ಕೆಲವರಿಗೆ ಐದು ಶುಕ್ರವಾರಗಳ ನಂತರ, ಆರ್ಥಿಕ ಮುಗ್ಗಟ್ಟು ಪರಿಹಾರವಾಗಬಹುದು. ಅನೇಕರು ಇದರಿಂದ ಪ್ರಯೋಜನ ಪಡೆದು ಸುಖಿಗಳಾಗಿದ್ದಾರೆ. 'ಗೃಹಿಣೀ ಗೃಹಮುಚ್ಯತೇ' ಎಂಬಂತೆ ಮನೆಯಾಕೆ ಸಂತೋಷಚಿತ್ತದಿಂದಿದ್ದರೆ ಆ ಮನೆಯು ಸ್ವರ್ಗವಾಗುತ್ತದೆ, ನಂದನವನವಾಗುತ್ತದೆ.

ವಿಶೇಷ ನಿಯಮಗಳು
ಮಣೆಯ ಮೇಲೆ ಸ್ವಲ್ಪ ಅಕ್ಕಿಯನ್ನು ಹರಡಿ ಬಟ್ಟಲಲ್ಲಿ ಯಾವುದಾದರೂ ಆಭರಣವಿಟ್ಟು ಅದರಲ್ಲಿ ವೈಭವಲಕ್ಷ್ಮಿಯನ್ನು ಪೂಜಿಬೇಕು

1. ಪೂಜೆಗಾಗಿ ಚಿನ್ನದ ಆಭರಣಗಳನ್ನು ಇಡಲು ಸಾಧ್ಯವಿಲ್ಲದವರು ಬೆಳ್ಳಿಯ ರೂಪಾಯಿ ಅಥವಾ ಲಕ್ಷ್ಮೀದೇವಿಯ (ಗಜಲಕ್ಷ್ಮಿ) ಸುಂದರವಾದ ಚಿತ್ರ ಅಥವಾ ಈ ಪುಸ್ತಕದಲ್ಲಿ ಕೊಟ್ಟಿರುವ ಚಿತ್ರವನ್ನು ಪೂಜಿಸಿ, ಪರಿಸ್ಥಿತಿ ಸುಧಾರಿಸಿದ ಮೇಲೆ ಚಿನ್ನದ ಆಭರಣಗಳನ್ನಿಟ್ಟು ಲಕ್ಷ್ಮೀ ದೇವಿಯನ್ನು ಪೂಜಿಸಬಹುದು.

2. ಈ ಪೂಜೆಯನ್ನು ಮಾಡುವವರು ಐದು ಶುಕ್ರವಾರಗಳಲ್ಲಿ ಕೊನೆಯ ಶುಕ್ರವಾರ ಎಂಟು ಜನ ಮುತ್ತೈದೆಯರಿಗೆ ಅರಿಶಿನ, ಕುಂಕುಮ ತಾಂಬೂಲ ಹಾಗೂ ಈ ಪುಸ್ತಕದ ಪ್ರತಿಯನ್ನು ದಾನ ಮಾಡಿದರೆ ಅತ್ಯುತ್ತಮ ಫಲ ದೊರೆಯುವುದು ನಿಶ್ಚಿತ. 

3. ಲಕ್ಷ್ಮೀದೇವಿಯ ಭಕ್ತರು-ಆರ್ಥಿಕ ಮುಗ್ಗಟ್ಟು, ವಿವಾಹ, ಉದ್ಯೋಗ ಮತ್ತು ಆಪತ್ತುಗಳ ಹಾಗೂ ಮನಃಕ್ಷೇಶಗಳ ನಿವಾರಣೆಗೆ ವಿಶೇಷವಾಗಿ ಈ ಪೂಜೆಯನ್ನು ಆರಂಭಿಸಿದರೆ ತಾವು ನೆನೆಸಿಕೊಂಡ ಕಾರ್ಯಸಿದ್ದಿಯಾದ ನಂತರ ಬರುವ ಶುಕ್ರವಾರದ ಸಂಜೆ ಎಂಟು ಜನ ಮುತ್ತೈದೆಯರಿಗೆ ಅರಿಶಿನ, ಕುಂಕುಮ, ಬಳೆ ಹಾಗೂ ಈ ಪುಸ್ತಕದ ಒಂದು ಪ್ರತಿಯನ್ನು ದಾನವಾಗಿ ನೀಡಬೇಕು. ಇದರಿಂದ 64 ಜನರು ಲಕ್ಷ್ಮೀ ಪೂಜೆಯನ್ನು ಆಚರಿಸಿದ ಪುಣ್ಯ ದೊರೆಯುವುದು. ಕುಂಟುಂಬದ ಎಲ್ಲರಿಗೂ ಸರ್ವಮಂಗಳವಾಗುವುದು.

4. ಲಕ್ಷ್ಮೀದೇವಿಯ ನೈವೇದ್ಯಕ್ಕೆ - ಹುರಿಗಡಲೆ, ಬೆಲ್ಲ, ರಸಬಾಳೆಹಣ್ಣ ಗೋಧಿಯ ಪಾಯಸ ತುಂಬಾ ಉತ್ತಮವಾದುದು. ಐದನೆಯ ವಾರ ಗೋಧಿಯ ಪಾಯಸವನ್ನು ನೈವೇದ್ಯ ಮಾಡಬೇಕು.

5. ಒಮ್ಮೆ ಈ ಪೂಜೆಯನ್ನು ಪ್ರಾರಂಭಿಸಿದ ಮೇಲೆ ಕಾರ್ಯಸಿದ್ದಿಯಾಗುವ ವರೆಗೂ ಇದನ್ನು ನಿಲ್ಲಿಸಬಾರದು. ಕೇವಲ 15 ಅಥವಾ 20 ನಿಮಿಷಗಳಲ್ಲಿ ಆಚರಿಸಬಹುದಾದ ಈ ಪೂಜೆಯನ್ನು ನಿಲ್ಲಿಸುವ ಸಂದರ್ಭ ಬಹುಶಃ ಬರಲಾರದು.

6. ಪೂಜೆಯನ್ನು ಮಾಡುವವರು ಶುಕ್ರವಾರದ ದಿನ ಬಹಿಷ್ಠೆ (ಹೊರಗೆ) ಯಾಗಿದ್ದರೆ ಅವರ ಬದಲು ಅವರ ಪತಿ ಅಥವಾ ಮಕ್ಕಳು ಇದನ್ನು ಯಾವುದೇ ಯೋಚನೆ ಇಲ್ಲದೆ ಆಚರಿಸಬಹುದು. ಒಂದು ಮನೆಯಲ್ಲಿ ಒಬ್ಬರಿಗಿಂತ ಹೆಚ್ಚು ಮುತ್ತೈದೆಯರಿದ್ದರೆ ಅವರವರ ಅನುಕೂಲದಂತೆ ಒಟ್ಟಿಗೆ ಅಥವಾ ಪ್ರತ್ಯೇಕವಾಗಿ ಪೂಜೆಯನ್ನು ಆಚರಿಸಬಹುದು. ಆದರೆ ಕೊನೆಯಲ್ಲಿ ಆರತಿಯನ್ನು ಒಟ್ಟಿಗೇ ಮಾಡಬೇಕು.

7. ಪ್ರವಾಸದಲ್ಲಿರುವಾಗಲಕ್ಷಿಯ ಚಿತ್ರಪಟ, ಪೂಜಾ-ವಿಧಾನದ ಪುಸ್ತಕಗಳನ್ನು ಜೊತೆಯಲ್ಲಿಟ್ಟುಕೊಂಡು ಶುಕ್ರವಾರ ಶುಕ್ರವಾರ ಸಾಯಂಕಾಲ ಯಥಾಶಕ್ತಿ,  ನೈವೇದ್ಯ ಮಾಡಿ, ಪೂಜಿಸಿ ವ್ರತವು ತಪ್ಪದಂತೆ ನೋಡಿಕೊಳ್ಳಬೇಕು.

8. ಎಷ್ಟೆಷ್ಟು ಜನ ಈ ಪೂಜಾ ವಿಧಾನವನ್ನು ನಿಮ್ಮಿಂದ ತಿಳಿದುಕೊಳ್ಳುತ್ತಾರೆಯೋ ಅಷ್ಟಷ್ಟು ಪುಣ್ಯ - ಹೆಚ್ಚು ಧನಲಾಭ ನಿಮಗಾಗುತ್ತದೆ. 

ಹೀಗೆ ಸರಳ ಪೂಜೆಯಿಂದ ದೊಡ್ಡ ಲಾಭ ಪಡೆಯುವ ಏಕೈಕ ಪೂಜೆ "ಶ್ರೀ ವೈಭವಲಕ್ಷ್ಮೀ ಪೂಜೆ" ಯಾಗಿದೆ.
ಪೂರ್ವ ಸಿದ್ಧತೆ
1. ಪೂಜಾಸ್ಥಳವನ್ನು ಶುದ್ದಮಾಡಿ, ಈ ಪುಸ್ತಕದಲ್ಲಿ ಕೊಟ್ಟಿರುವ ರಂಗವಲ್ಲಿ ಹಾಕಿ ಪೂರ್ವಾಭಿಮುಖವಾಗಿ ಲಕ್ಷ್ಮಿಯನ್ನು ಇರಿಸಬೇಕು.

2. ಪೂಜಾಸ್ಥಳದ ಸಮೀಪದಲ್ಲಿ ಹಾಸಿಗೆ ಬಟ್ಟೆಗಳನ್ನು ಇಡಬಾರದು. ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಎತ್ತರದ ಗೂಡಿನಲ್ಲಿ ಪೂಜೆಯನ್ನು ಮಾಡಬಹುದು.

3. ಪೂಜಾಕಾಲದಲ್ಲಿ ಕೈಕಾಲು ಮುಖಗಳನ್ನು ತೊಳೆದುಕೊಂಡು ಹಣೆಗೆ ಕುಂಕುಮವನ್ನು ಇಟ್ಟುಕೊಂಡು ನಿರ್ಮಲವಾದ ಮನಸ್ಸಿನಿಂದ ಪೂಜೆಯನ್ನು ಆಚರಿಸಬೇಕು.

4. ಪೂಜೆಗೆ ಅಗತ್ಯವಾಗ ಅರಿಶಿನ, ಕುಂಕುಮ, ಮಂತ್ರಾಕ್ಷತೆ ಬಟ್ಟಲು, ಹೂ ತುಂಬಿದ ಪಾತ್ರೆ, ಗೆಜ್ಜೆ, ವಸ್ತ್ರ, ಮಂಗಳಾರತಿಗೆ ಗಡ್ಡೆ ಕರ್ಪೂರ ಅಥವಾ ಮೂರು, ಐದು, ಒಂಭತ್ತು ಎಳೆಯ ಬತ್ತಿಯನ್ನು ಸಿದ್ದ ಪಡಿಸಿಕೊಳ್ಳಬೇಕು. 

5. ಪೂಜಾ ಸಲಕರಣೆಗಳು ಕಾಲುಗಳಿಗೆ ತಗಲುವಂತಿರಬಾರದು.

6. ಶ್ರೀಮನ್ನಾರಾಯಣನನ್ನು ಮನದಲ್ಲಿ ಸ್ಮರಿಸದೆ ಶ್ರೀಲಕ್ಷ್ಮೀಪೂಜೆಯನ್ನು ಮಾಡಬಾರದು.

ಶ್ರೀ ಪ್ರಸನ್ನ ವೈಭವ ಲಕ್ಷ್ಮಿ ಪೂಜಾಕ್ರಮ

ಶುಕ್ಲಾಂಬರಧರಂ ವಿಷ್ಣುಂ 
ಶಶಿವರ್ಣಂ ಚತುರ್ಭುಜಂ |
ಪ್ರಸನ್ನವದನಂ ಧ್ಯಾಯೇತ್ 
ಸರ್ವವಿಘ್ನೋಪ ಶಾಂತಯೇ ||
(ಕೈಜೋಡಿಸಿ ಪ್ರಾರ್ಥಿಸಬೇಕು)

ಶ್ರೀಮನ್ನಾರಾಯಣ ನಾಮಸ್ಮರಣೆ :
ಕೇಶವಾಯ ನಮಃ |
ನಾರಾಯಣಾಯ ನಮಃ | 
ಮಾಧವಾಯ ನಮಃ |
ಗೋವಿಂದಾಯ ನಮಃ |
ವಿಷ್ಣವೇ ನಮಃ |
ಮಧುಸೂದನಾಯ ನಮಃ |
ತ್ರಿವಿಕ್ರಮಾಯ ನಮಃ |
ವಾಮನಾಯ ನಮಃ |
ಶ್ರೀಧರಾಯ ನಮಃ |
ಹೃಷೀಕೇಶಾಯ ನಮಃ |
ಪದ್ಮನಾಭಾಯ ನಮಃ |
ದಾಮೋದರಾಯ ನಮಃ |
ಸಂಕರ್ಷಣಾಯ ನಮಃ |
ವಾಸುದೇವಾಯ ನಮಃ |
ಪ್ರದ್ಯುಮ್ನಾಯ ನಮಃ |
ಅನಿರುದ್ಧಾಯ ನಮಃ |
ಪುರುಷೋತ್ತಮಾಯ ನಮಃ |
ಅಧೋಕ್ಷಜಾಯ ನಮಃ |
ನಾರಸಿಂಹಾಯ ನಮಃ |
ಅಚ್ಯುತಾಯ ನಮಃ |
ಜನಾರ್ದನಾಯ ನಮಃ |
ಉಪೇಂದ್ರಾಯ ನಮಃ |
ಹರಯೇ ನಮಃ |
ಶ್ರೀಕೃಷ್ಣಾಯ ನಮಃ |

ಶ್ರೀಮನ್ ಮಹಾಗಣಾಧಿಪತಯೇ ನಮಃ | 
ಇಷ್ಟ ದೇವತಾಭ್ಯೋ ನಮಃ | 
ಕುಲ ದೇವತಾಭ್ಯೋ ನಮಃ | 
ಸರ್ವೆಭ್ಯೋ ದೇವೇಭ್ಯೋ ನಮಃ | 
ಶಾಂತಿರಸ್ತು |  ಪುಷ್ಠಿರಸ್ತು | ಅವಿಘ್ನಮಸ್ತು ||

ಆಗಮಾರ್ಥಂ ತು ದೇವಾನಾಂ 
ಗಮನಾರ್ಥಂತು ರಕ್ಷಸಾಂ |  
ಕುರು ಘಂಟಾರವಂ ತತ್ರ 
ದೇವತಾಹ್ವಾನ ಲಾಂಛನಂ||
ಎಂದು ಪಠಿಸಿ ಘಂಟಾನಾದವನ್ನು ಮಾಡಿ

ಸಂಕಲ್ಪ : 
(ಕೈಯಲ್ಲಿ ಅಕ್ಷತೆಕಾಳನ್ನು ಹಿಡಿದು)

ಶುಭೇ ಶೋಭನೇ ಮುಹೂರ್ತೇ | ಆದ್ಯ ಬ್ರಹ್ಮಣಃ । ದ್ವಿತೀಯ ಪರಾರ್ಧೇ ಶ್ರೀ ಶ್ವೇತವರಾಹಕಲ್ಪೇ ವೈವಸ್ವತಮನ್ವಂತರೇ।
ಕಲಿಯುಗೇ ।  ಭರತವರ್ಷೇ | ಭರತಖಂಡೇ | ಜಂಬೂದ್ವೀಪೇ |  ದಂಡಕಾರಣ್ಯೇ । ಗೋದಾವರ್ಯಾಃ | ದಕ್ಷಿಣೇ ತೀರೇ | ಶಾಲಿವಾಹನ ಶಕೇ ।  ಬೌದ್ಧಾವತಾರೇ | ಶ್ರೀರಾಮಕ್ಷೇತೇ | ಚಾಂದ್ರಮಾನೇನ | ಪ್ರಭವಾದಿ ಶ್ರಷ್ಠಿ ಸಂವತ್ಸರಾಣಾಂ ಮಧ್ಯೆ  .......... ಸಂವತ್ಸರಸ್ಯ ............ ಆಯನೇ .......... ಋತೌ ......... ಮಾಸೇ .......... ಪಕ್ಷೇ ............. ತಿಥೌ ................ ವಾಸರೇ ............. ನಕ್ಷತೇ ಏವಂ ಗುಣ ವಿಶೇಷೇಣ ವಿಶಿಷ್ಟಾಯಾಂ ಶುಭತಿಥೌ ಶ್ರೀಪ್ರಸನ್ನ ವೈಭವಲಕ್ಷ್ಮೀ ವ್ರತಮಹಂ ಕರಿಷ್ಯೇ || 
(ಅಕ್ಷತೆಕಾಳನ್ನು, ನೀರನ್ನು ತಟ್ಟೆಗೆ ಹಾಕಬೇಕು)

ಕಲಶಪೂಜಾ :
ಗಂಗೇಚ ಯಮುನೇ ಚೈವ 
ಗೋದಾವರೀ ಸರಸ್ವತೀ | 
ನರ್ಮದೇ ಸಿಂಧು ಕಾವೇರಿ 
ಜಲೇಸ್ಮಿನ್ ಸನ್ನಿಧಿಂ ಕುರು ||
(ಕಲಶದ ನೀರನ್ನು ಪೂಜಿಸಿ, ಆ ನೀರನ್ನು ತಲೆಯಮೇಲೆ ಹಾಗೂ ಪೂಜಾ ದ್ರವ್ಯದ ಮೇಲೆ ಪ್ರೋಕ್ಷಿಸಬೇಕು.)

ತತ್ರಾದೌ ನಿರ್ವಿಘ್ನತಾ ಸಿಧ್ಯರ್ಥಂ ಶ್ರೀಮನ್ಮಹಾ ಗಣಪತಿ ಪೂಜಾಂ ಕರಿಷ್ಯೇ ||

ವಕ್ರತುಂಡ ಮಹಾಕಾಯ 
ಕೋಟಿಸೂರ್ಯ ಸಮಪ್ರಭ |
ನಿರ್ವಿಘ್ನಂ ಕುರುಮೇದೇವ 
ಸರ್ವಕಾರ್ಯೇಷು ಸರ್ವದಾ ||
(ಎಂದು ಅರಿಶಿನ ಕುಂಕುಮದಿಂದ ಪೂಜಿಸಬೇಕು)

ಶ್ರೀ ವೈಭವ ಲಕ್ಷ್ಮೀ ಧ್ಯಾನಂ :
ಯಾಸಾ ಪದ್ಮಾಸನಸ್ಥಾ 
ವಿಪುಲಕಟೀ ಪದ್ಮ ಪತ್ರಾಯತಾಕ್ಷಿ |
ಗಂಭೀರಾ ವರ್ತನ ಅಭಿಸ್ತನಭರ 
ನಮಿತಾ ಶುಭ್ರ ವಸ್ತ್ರೋತ್ತರೀಯಾ |
ಲಕ್ಷ್ಮೀರ್ ದಿವೈರ್ ಗಜೇಂದ್ರೈ 
ಮಣಿ ಗಣ ಖಚಿತಾ ವಾಸಿತಾ ಹೇಮ ಕುಂಭೈ |
ನಿತ್ಯಂ ಸಾ ಪದ್ಮಹಸ್ತಾ ಮಮ ವಸತು 
ಗೃಹೇ ಸರ್ವ ಮಾಂಗಲ್ಯ ಯುಕ್ತಾ |
(ಕೈ ಜೋಡಿಸಿ ಪ್ರಾರ್ಥಿಸಿ ಪೂಜಾಕಲಶಕ್ಕೆ ಹೂ, ಅಕ್ಷತೆ ಅರ್ಪಿಸುವುದು)

ಸರ್ವಮಂಗಲ ಮಾಂಗಲೇ 
ಶಿವೇ ಸರ್ವಾರ್ಥ ಸಾಧಿಕೇ |
ಶರಣೇ ತ್ಯಂಬಕೇ ದೇವೀ 
ನಾರಾಯಣೀ ನಮೋಸ್ತುತೇ ||

ಆವಾಹಯಾಮಿ | ಆಸನಂ ಸಮರ್ಪಯಾಮಿ |
ಆರ್ಘ್ಯ - ಪಾದ್ಯ - ಆಚಮನ - ಸ್ನಾನ - ವಸ್ತ್ರ - ಅಕ್ಷತಾಂ ಸಮರ್ಪಯಾಮಿ ||
ಲಕ್ಷ್ಮೀದೇವಿಗೆ ಶೋಡಶೋಪಚಾರ ಪೂಜೆಯನ್ನು ಕ್ರಮವಾಗಿ ಮಾಡಿದಂತೆ ಭಾವಿಸುವುದು.
(ಹೂ, ಅಕ್ಷತೆಕಾಳು ಅರ್ಪಿಸುವುದು)

(ಕೈ ಜೋಡಿಸಿ)
ವಂದೇ ಲಕ್ಷ್ಮೀಂ ಪರ ಶಿವ ಮಯಿಾಂ 
ಶುದ್ಧ ಜಾಂಬೂ ನದಾಭಾಂ |
ತೇಜೋ ರೂಪಾಂ ಕನಕ ವಸನಾ 
ಸರ್ವ ಭೂಷೇಜ್ವಲಾಂಗೀ ||

ಬೀಜಾ ಪೂರಂ ಕನಕ  ಕಲಶಂ 
ಹೇಮ ಪದ್ಮಂ ದಧಾನಾಂ |
ಆದ್ಯಾಂ ಶಕ್ತಿ ಸಕಲ ಜನನೀಂ 
ವಿಷ್ಣು ನಾಮಾಂಕ ಸಂಸ್ಥಾಮ್ ||
(ಎಂದು ಪಠಿಸಿ ಹೂ, ಅಕ್ಷತೆ ಗೆಜ್ಜೆವಸ್ತ್ರಗಳನ್ನು ಅರ್ಪಿಸಬೇಕು)

ಶ್ರೀ ವೈಭವ ಲಕ್ಷ್ಮೇ ನಮಃ| 
ಗಂಧಂ ಸಮರ್ಪಯಾಮಿ||
ಶ್ರೀ ವೈಭವ ಲಕ್ಷ್ಮೇ ನಮಃ| 
ಹರಿದ್ರಾ ಕುಂಕುಮ ಸಮರ್ಪಯಾಮಿ||
ಶ್ರೀ ವೈಭವ ಲಕ್ಷ್ಮೇ ನಮಃ| 
ಅಕ್ಷತಾಂ ಸಮರ್ಪಯಾಮಿ ||
ಶ್ರೀ ವೈಭವ ಲಕ್ಷ್ಮೇ ನಮಃ| ನಾನಾವಿಧ ಪರಿಮಳ ದ್ರವ್ಯಾನಿ ಸಮರ್ಪಯಾಮಿ ||


ಮಂತ್ರಪೂಜಾ : 
(ಕೈಜೋಡಿಸಿ ಪ್ರಾರ್ಥಿಸಬೇಕು)
ಹಿರಣ್ಯ ವರ್ಣಾಂ ಹರಿಣೀಂ 
ಸುವರ್ಣ ರಜತಸ್ರಜಾಂ |
ಚಂದ್ರಾಂ ಹಿರಣ್ಮಯಿಾಂ ಲಕ್ಷೀಂ
ಜಾತ ವೇದೋಮ ಆವಹ ||
||  ಶ್ರೀ ಸೂಕ್ತ ಪೂಜಾಂ ಸಮರ್ಪಯಾಮಿ ||

ಧೂಪ - ದೀಪ - ನೈವೇದ್ಯಾದಿ ಸಮಸ್ತ ರಾಜೋಪಚಾರ ಪೂರ್ಜ ಸಮರ್ಪಯಾಮಿ
(ಗಂಧ, ಹೂ, ಅಕ್ಷತೆ ಅರ್ಪಿಸಿ ನಮಸ್ಕರಿಸಬೇಕು)
ಸಿದ್ಧಿ ಲಕ್ಷ್ಮೀ ಸ್ತೋತ್ರಮ್ :

ಶ್ರೀದೇವೀ ಪ್ರಥಮಾ ಪ್ರೋಕ್ತಾ 
ದ್ವಿತೀಯಾ ಅಮೃತೋದ್ವವಾ ।
ತೃತೀಯಾ ಕಮಲಾದೇವಿ 
ಚತುರ್ಥಿ ಲೋಕಸುಂದರೀ || 1 ||

ಪಂಚಮಿಾ ವಿಷ್ಣು ಪತ್ನಿ ಚ 
ಷಷ್ಠಿ ಚ ಭುವನತ್ರಯಾ |
ಸಪ್ತಮಿಾತು ವರಾ ರೋಹಾ 
ಅಷ್ಟಮಿ ದೇವಿಕಾ || 2 ||

ಸಾರಂಗ ಪಾಣೀ ನವಮಿಾ, 
ದಶಮಿ ಹರಿವಲ್ಲಭಾ |
ಏಕಾದಶೀ ಮಹಾಲಕ್ಷ್ಮೀ 
ದ್ವಾದಶೀ ಲೋಕಪೂಜಿತಾ || 3 ||

ಇದಂ ಮತ್ರಾತ್ಮಕಂ ಸ್ತೋತ್ರಂ  ಯಃ ಪಠೇತ್ ಚ ಸುಚಿನ್ನರಃ |
ತಸ್ಯ ಸರ್ವಾನಿ ಕಾರ್ಯಾನಿ ಸಿದ್ಧಂತ್ಯೇವ ನ ಸಂಶಯಃ |
(ಈಗ ಮಾಡಿದ ಸಿಹಿ ತಿಂಡಿ ಹಾಗೂ ಪ್ರಸಾದಗಳ ಮೇಲೆ ಕಲಶೋಧಕವನ್ನು ಪ್ರೋಕ್ಷಿಸಿ ಮಹಾನೈವೇದ್ಯವನ್ನು ದೇವಿಗೆ ಅರ್ಪಿಸಬೇಕು)

ಶ್ರೀಮಹಾಲಕ್ಷ್ಮೀ
ಅಷ್ಟೋತ್ತರ ಶತನಾಮಾವಳಿಃ ಪೂಜಾ
(ಬಿಡಿಹೂವಿನಿಂದ ಪೂಜಿಸುವುದು)

ಓಂ ಪ್ರಕೃತೈ ನಮಃ
ಓಂ ವಿಕೃತೈ ನಮಃ
ಓಂ ವಿದ್ಯಾಯೈ ನಮಃ
ಓಂ ಸರ್ವ ಭೂತ ಹಿತ ಪ್ರದಾಯ ನಮಃ
ಓಂ ಶ್ರದ್ದಾಯ್ಕೆ ನಮಃ
ಓಂ ವಿಭೂತೈ ನಮಃ
ಓಂ ಸುರಭ್ಯ ನಮಃ
ಓಂ ಪರಮಾತ್ಮಿಕಾಯೈ ನಮಃ
ಓಂ ವಾಚೇ ನಮಃ
ಓಂ ಪದ್ಮಾಲಯಾಯೈ ನಮಃ  || ೧೦ ||

ಓಂ ಪದ್ಮಾಯೈ ನಮಃ
ಓಂ ಶುಚಯೇ ನಮಃ
ಓಂ ಸುಧಾಯೈ ನಮಃ
ಓಂ ಸ್ವಾಹಾಯೈ ನಮಃ
ಓಂ ಸ್ವಧಾಯೈ ನಮಃ
ಓಂ ಧನ್ಯಾಯೈ ನಮಃ
ಓಂ ಹಿರಣ್ಮಯೈ ನಮಃ
ಓಂ ಲಕ್ಷೆ ನಮಃ
ಓಂ ನಿತ್ಯಪುಷ್ಟಾಯೈ ನಮಃ
ಓಂ ವಿಭಾವರ್ಯೈ ನಮಃ || ೨೦ ||

ಓಂ ಅದಿತೈ ನಮಃ
ಓಂ ದಿತೈ ನಮಃ
ಓಂ ದೀಪ್ತಾಯೈ ನಮಃ
ಓಂ ವಸುಧಾಣಯ ನಮಃ
ಓಂ ವಸುಧಾರಿಣೇ ನಮಃ
ಓಂ ಕಮಲಾಯ್ಕೆ ನಮಃ
ಓಂ ಕಾಂತಾಯ ನಮಃ
ಓಂ ಕಾಮಾಕ್ಷೆ ನಮಃ
ಓಂ ಕ್ರೋಧಸಂಭವಾಯ ನಮಃ
ಓಂ ಅನುಗ್ರಹಪ್ರದಾಯ ನಮಃ || ೩೦ ||

ಓಂ ಬುದ್ದೆಯೇ ನಮಃ
ಓಂ ಅನಘಾಯ ನಮಃ
ಓಂ ಹರಿವಲ್ಲಭಾಯ ನಮಃ
ಓಂ ಅಶೋಕಾಯ ನಮಃ
ಓಂ ಅಮೃತಾಯ್ಕೆ ನಮಃ
ಓಂ ದೀಪ್ತಾಯ ನಮಃ
ಓಂ ಲೋಕಶೋಕವಿನಾಶಿನೈ ನಮಃ
ಓಂ ಧರ್ಮನಿಲಯಾಯ ನಮಃ
ಓಂ ಕರುಣಾಯ ನಮಃ
ಓಂ ಲೋಕಮಾತ್ರೇ ನಮಃ || ೪೦ ||

ಓಂ ಪದ್ಮಪ್ರಿಯಾಯ್ಕೆ ನಮಃ
ಓಂ ಪದ್ಮಹಸ್ತಾಯ್ಕೆ ನಮಃ
ಓಂ ಪದ್ಮಾಕ್ಷೆ ನಮಃ
ಓಂ ಪದ್ಮಸುಂದರೆ ನಮಃ
ಓಂ ಪದ್ಯೋದ್ಭವಾಯ ನಮಃ
ಓಂ ಪದಮುಖ್ಯೆ ನಮಃ
ಓಂ ಪದ್ಮನಾಭಪ್ರಿಯಾಯೋ ನಮಃ
ಓಂ ರಮ್ಯಾಖ್ಯೆ ನಮಃ
ಓಂ ಪದ್ಯಮಾಲಾಧರಾಯ ನಮಃ
ಓಂ ದೇವೈ ನಮಃ  || ೫೦ ||

ಓಂ ಪದಿನೈ ನಮಃ
ಓಂ ಪದ್ಯಗಂಧಿನೈ ನಮಃ
ಓಂ ಪುಣ್ಯಗಂಧಾಯ್ಕೆ ನಮಃ
ಓಂ ಸುಪ್ರಸನ್ನಾಯ ನಮಃ
ಓಂ ಪ್ರಸಾದಾಭಿಮುಖ್ಯ ನಮಃ
ಓಂ ಪ್ರಭಾಖ್ಯೆ ನಮಃ
ಓಂ ಚಂದ್ರವದನಾಯ ನಮಃ
ಓಂ ಚಂದ್ರಾಯ ನಮಃ
ಓಂ ಚಂದ್ರಸಹೋದರೆ ನಮಃ
ಓಂ ಚತುರ್ಭುಜಾಯ ನಮಃ || ೬೦ ||

ಓಂ ಚಂದ್ರರೂಪಾಯ ನಮಃ
ಓಂ ಇಂದಿರಾಯ್ಕೆ ನಮಃ
ಓಂ ಇಂದುಶೀತಲಾಯ ನಮಃ
ಓಂ ಆಹ್ಲಾದಜನನೈ ನಮಃ
ಓಂ ಪುಷ್ಟೆ ನಮಃ
ಓಂ ಶಿವಾಯ ನಮಃ
ಓಂ ಶಿವಕರೈ ನಮಃ
ಓಂ ಸತೈ ನಮಃ
ಓಂ ವಿಮಲಾಯ್ಕೆ ನಮಃ
ಓಂ ವಿಶ್ವಜನನೈ ನಮಃ || ೭೦ ||

ಓಂ ತುಷ್ಟೆ ನಮಃ
ಓಂ ದಾರಿದ್ರನಾಶಿನೈ ನಮಃ
ಓಂ ಪೀತಪುಷ್ಕರಿಣೈ ನಮಃ
ಓಂ ಶಾಂತಾಯ್ಕೆ ನಮಃ
ಓಂ ಶುಕ್ತಮಾಲ್ಯಾಂಬರಾಯ ನಮಃ
ಓಂ ಶ್ರಿಯೆ ನಮಃ
ಓಂ ಭಾಸ್ಕರೈ ನಮಃ
ಓಂ ಬಿಲ್ವನಿಲಯಾಯೇ ನಮಃ
ಓಂ ವರಾರೋಹಾಯ ನಮಃ
ಓಂ ಯಶಸ್ವಿನೈ ನಮಃ || ೮೦ ||

ಓಂ ವಸುಂಧರಾಯ ನಮಃ
ಓಂ ಉದಾರಾಂಗಾಯ ನಮಃ
ಓಂ ಹರಿಣೈ ನಮಃ
ಓಂ ಹೇಮಮಾಲಿನ್ಯ ನಮಃ
ಓಂ ಧನಧಾನ್ಯಕರ್ಯ್ಯ ನಮಃ
ಓಂ ಸಿದಯೇ ನಮಃ
ಓಂ ಸೈಣಸೌಮ್ಯಾಯ ನಮಃ
ಓಂ ಶುಭಪ್ರದಾಯೇ ನಮಃ
ಓಂ ನೃಪವೇಶಗತಾನಂದಾಯ್ಕೆ ನಮಃ
ಓಂ ವರಲಕ್ಷ್ಮೀ ನಮಃ || ೯೦ ||

ಓಂ ವಸುಪ್ರದಾಯ ನಮಃ
ಓಂ ಶುಭಾಯ ನಮಃ
ಓಂ ಹಿರಣ್ಯಪ್ರಾಕಾರಾಯ ನಮಃ
ಓಂ ಸಮುದ್ರತನಯಾಯೇ ನಮಃ
ಓಂ ಜಯಾಯ ನಮಃ
ಓಂ ಮಂಗಳಾದೇವೆ ನಮಃ
ಓಂ ವಿಷ್ಣುವಕ್ಷಸ್ಥಲಸ್ಥಿತಾಯ ನಮಃ
ಓಂ ವಿಷ್ಣುಪತ್ನ ನಮಃ
ಓಂ ಪ್ರಸನ್ನಾಕ್ಷೆ ನಮಃ
ಓಂ ನಾರಾಯಣಸಮಾಶ್ರಿತಾಯ್ತ ನಮಃ || ೧೦೦ ||

ಓಂ ದಾರಿದ್ರಧ್ವಂಸಿನೈ ನಮಃ
ಓಂ ದೇವೈ ನಮಃ
ಓಂ ಸರ್ವೋಪದ್ರವನಿವಾರಿಣ್ಯ ನಮಃ
ಓಂ ನವದುರಾಯ ನಮಃ
ಓಂ ಮಹಾಕಾಳ್ಯ ನಮಃ
ಓಂ ಬ್ರಹ್ಮವಿಷ್ಣುಶಿವಾತ್ಮಿಕಾಯೋನಮಃ
ಓಂ ತ್ರಿಕಾಲಜ್ಞಾನಸಂಪನ್ನಾಯ್ಕೆ ನ
ಓಂ ಭುವನೇಶ್ವರೈ ನಮಃ || ೧೦೮ ||


|| ಶ್ರೀ ಮಹಾಲಕ್ಷ್ಮೀ ಅಷ್ಟೋತ್ತರ ಶತನಾಮಾವಳಿ ಪೂಜಾಂ ಸಮರ್ಪಯಾಮಿ ||

ಎಂದು ಪುಷ್ಪಾರ್ಚನೆ ಮಾಡಿ ನಮಸ್ಕರಿಸುವುದು

ನಮಸ್ಕಾರ :
(ಹೂ ಅಕ್ಷತೆಯನ್ನು ಕೈಯಲ್ಲಿ ಹಿಡಿದು)

ಯಾ ರಕ್ತಾಂಬುಜ ವಾಸಿನೀ ವಿಲಸಿನೀ 
ಚಂಡಾಂಶು ತೇಜಸ್ವಿನೀ |
ಆರಕ್ತಾರುಧಿರಾಂಬರಾ ಹರಸಖೀ 
ಯಾ ಶ್ರೀ ಮನೋಹ್ಲಾದಿನೀ ||

ಯಾ ರತ್ನಾಕರ ಮಂಥನಾತ್ 
ಪ್ರಘಟಿತಾ ವಿಷೇಶ್ಚಯಾ ಗೇಹಿನೀ |
ಸಾಮಾಂ ಪಾತು ಮನೋರಮಾ 
ಭಗವತೀ ಲಕ್ಷ್ಮೀಶ್ಚ ಪದ್ಮಾ ಶುಭಾ |

(ಎಂದು ಪ್ರಾರ್ಥಿಸಿ ಸಾಷ್ಟಾಂಗ ನಮಸ್ಕಾರ ಮಾಡಬೇಕು)

ಮಹಾಲಕ್ಷ್ಮಿಚ ವಿದ್ಮಹೇ 
ವಿಷ್ಣುಪತ್ನ ಚ ಧೀಮಹಿ |
ತನ್ನೋ ಲಕ್ಷ್ಮೀ ಪ್ರಚೋದಯಾತ್ ||
ಎಂದು ಪ್ರಾರ್ಥಿಸಿ ವೈಭವ ಲಕ್ಷ್ಮೀ ದೇವಿಯನ್ನು ಪೂಜಿಸಿದ ನಂತರ

ಅನಯಾ ಪೂಜಯಾ ಭಗವತೀ ವೈಭವ ಲಕ್ಷ್ಮೀ
ಪ್ರಿಯತಾಂ ಪೀತಾ ವರದಾ ಭವತು ||
|| ಶ್ರೀ ಲಕ್ಷ್ಮೀ ನಾರಾಯಣ ಪ್ರಸಾದ ಸಿದ್ದಿರಸ್ತು ||
(ಅಕ್ಷತೆ, ನೀರನ್ನು ಅರ್ಭ್ಯ ಪಾತ್ರೆಗೆ ಬಿಟ್ಟು ದೇವಿಗೆ ಸಮರ್ಪಣೆ ಮಾಡಬೇಕು.)

ಪುನಃ ಪೂಜಾ
ದೇವಿ ದೇಹಿ ಪರಂ ಜ್ಞಾನಂ 
ದೇವಿ ದೇಹಿ ಪರಂ ಸುಖಂ |
ಧನಂ ದೇಹಿ ಯಶೋ ದೇಹಿ
ಕಾಮಂ ಮೋಕ್ಷಂಚ ದೇಹಿ ಮೇ ||

(ಎಂದು ಬೇಡಿಕೊಂಡು ಅಕ್ಷತೆ ಅರ್ಪಿಸಿ 5 ನಮಸ್ಕಾರಗಳನ್ನು ಹಾಕಿ ಪೂಜಾ ಸಮಾಪ್ತಿಯನ್ನು ಮಾಡಬೇಕು.)

ಶ್ರೀ ಪ್ರಸನ್ನ ವೈಭವಲಕ್ಷ್ಮೀ ಮಹಿಮೆ
ಜಗನ್ಮಾತೆಯಾದ ಶ್ರೀ ದೇವಿಯ ಅನಂತ ಕಲ್ಯಾಣ ರೂಪಗಳಲ್ಲಿ ವೈಭವಲಕ್ಷ್ಮೀ ರೂಪವೂ ಒಂದು. ತನ್ನ ಎಡ ಬಲಗಳಲ್ಲಿ ಸಂಪತ್‌ ದ್ಯೋತಕವಾದ ಗಜಗಳಿಂದ ದೇವಿ ಸೇವಿತಳಾಗಿದ್ದಾಳೆ. ಆಕೆಯು ಅರಳಿದ ತಾವರೆಯ ಮೇಲೆ ಸುಖಾಸೀನಳಾಗಿದ್ದಾಳೆ. ಚತುರ್ಭುಜಗಳಿಂದ ಶೋಭಿಸುವ ಮಾತೆಯು ಮೇಲಿನ ಎರಡು ಹಸ್ತಗಳಲ್ಲಿ ಅರಳಿದ ತಾವರೆ ಹೂಗಳನ್ನು ಭಕ್ತಿ ಶ್ರದ್ಧೆಗಳ ಸಂಕೇತವಾಗಿ ಧರಿಸಿದ್ದಾಳೆ. ಕೆಳಭಾಗದ ಎರಡು ಹಸ್ತಗಳಿಂದ ಭಕ್ತರಿಗೆ ಬಲಹಸ್ತದಿಂದ ಅಪಾರ
ಧನ ಸಂಪತ್ತನ್ನೂ ಎಡಹಸ್ತದಿಂದ ಅಭಯವನ್ನೂ ನೀಡಿ ಅನುಗ್ರಹಿಸುತ್ತಿದ್ದಾಳೆ. ವೈಭವ ಲಕ್ಷಿಯ ಮಹಿಮೆ ಅಪಾರವಾದದ್ದು. ಅನಾದಿಕಾಲದಿಂದಲೂ ಆಕೆಯನ್ನು ಭಕ್ತಿಯಿಂದ ಪೂಜಿಸಿದ ಹಲವಾರು ಭಕ್ತರು ಸಕಲ ಸೌಭಾಗ್ಯ ಸಂಪತ್ತುಗಳನ್ನು ಪಡೆದು, ಇಹ-ಪರ ಸುಖಗಳನ್ನು ಗಳಿಸಿ ಧನ್ಯರಾಗಿದ್ದಾರೆ. ಅಷ್ಟಲಕ್ಷ್ಮೀ ಎಂದು 8 ರೂಪಗಳಿಂದ ಭಕ್ತರನ್ನು ಅಷ್ಟೈಶ್ವರ್ಯಗಳಿಂದ ಹರಸುವ ಕರುಣಾಮಯಿಯಾದ ಈ ಜಗನ್ಮಾತೆಯನ್ನು ತಪ್ಪದೆ ಆರಾಧಿಸಬೇಕು. ಲಕ್ಷ್ಮಿಯ ಕೃಪೆಯಿಲ್ಲದೆ ನಾರಾಯಣನ ಕೃಪೆಯೂ ಇಲ್ಲ. ಮಕ್ಕಳು ಮೊದಲು ತಾಯಿಯನ್ನು ಮೊರೆಹೋಗುವಂತೆ ನಾವು ಆಕೆಯನ್ನು “ಓ ಜಗನ್ಮಾತೆ ! ಅನಾಥನೂ, ಸಕಲ ದಾರಿದ್ರಗಳಿಂದಲೂ ಬಳಲುತ್ತಿರುವ ನನ್ನನ್ನು ಸರ್ವಥಾ ಸಲಹು. ನಿನ್ನ ಕೃಪೆಯಿಂದಲೇ ಜೀವನದಲ್ಲಿ 8 ಬಗೆಯ ಐಸಿರಿಯನ್ನು ಪಡೆಯಲು ಸಾಧ್ಯವಾಗಿದೆ. ನಿನ್ನ ಪರಮಾನುಗ್ರಹವಿದ್ದರೆ ತಿರುಕನೂ ಶ್ರೀಮಂತನಾಗಬಲ್ಲ” ಎಂದು ಭಕ್ತಿಯಿಂದ ಪ್ರಾರ್ಥಿಸೋಣ.

ಶ್ರೀ, ಪದ್ಮಾ, ಕಮಲಾ, ಮುಕುಂದ ಮಹಿಷಿ, ಲಕ್ಷ್ಮೀ, ತ್ರಿಲೋಕೇಶ್ವರೀ, ಮಾ, ಕ್ಷೀರಾಬ್ಧಿಸುತಾ, ವಿರಿಂಚ ಜನನೀ, ವಿದ್ಯಾ, ಸರೋಜಾಸನಾ, ಸಾರ್ವಾಭಿಷ್ಟ ಫಲಪ್ರದಾ ಎಂಬ ಹನ್ನೆರಡು ಪುಣ್ಯಕರ ಲಕ್ಷ್ಮೀ ನಾಮಗಳನ್ನು ಪ್ರಾತಃ ಕಾಲದಲ್ಲಿ ಯಾರು ಪಠಿಸುವರೋ ಅವರು ಎಲ್ಲಾ ಬಗೆಯ ಅಭೀಷ್ಟಗಳನ್ನೂ ಪಡೆಯುತ್ತಾರೆ.

ಆದಿ ಲಕ್ಷ್ಮೀ, ಸಂತಾನಲಕ್ಷ್ಮೀ, ಗಜಲಕ್ಷ್ಮೀ, ಧನಲಕ್ಷ್ಮಿ, ಧಾನ್ಯಲಕ್ಷ್ಮೀ, ವಿಜಯಲಕ್ಷ್ಮಿ, ಧೈರ್ಯಲಕ್ಷ್ಮೀ ಮಹಾಲಕ್ಷ್ಮೀ ಎಂಬ ಎಂಟು ರೂಪಗಳಿಂದ ನಂಬಿದ ಭಕ್ತರನ್ನು ಸಲಹುತ್ತಿರುವ ಮಹಾತಾಯೇ! ನಿನಗೆ ಅನಂತಾನಂತ ನಮಸ್ಕಾರಗಳು ಎಂದು ಬೇಡೋಣ, ಸರ್ವ ಸುಗಂಧ ರೂಪಿಣಿ ಲಕ್ಷ್ಮಿಯನ್ನು ಹಾಲು, ಮೊಸರು, ತುಳಸಿ, ಪರಿಮಳ ದ್ರವ್ಯಗಳಿಂದ ಧನ-ಧಾನ್ಯಗಳಲ್ಲಿ ಸದಾ ನೆಲೆಸಿರುವ ಮಹಾಲಕ್ಷ್ಮಿಯನ್ನು ಭಕ್ತಿಯಿಂದ ಕೃತಜ್ಞತೆಯಿಂದ ನಮಸ್ಕರಿಸಬೇಕು. ಆಹಾರದಲ್ಲಿ ಲಕ್ಷ್ಮಿಯು ಸದಾ ನೆಲೆಸಿರುತ್ತಾಳೆ. ಅದನ್ನು ಎಂದೆಂದಿಗೂ ನಾವು ತಿರಸ್ಕಾರದಿಂದ ಕಾಣಬಾರದು. ಕೋಪ, ಅಸಮಾಧಾನ, ದುಃಖದಿಂದ ಆಹಾರವನ್ನು ಸೇವಿಸಿದರೆ ಲಕ್ಷ್ಮಿಯು ನಮಗೆ ಒಲಿಯಲಾರಳು. ಆದ್ದರಿಂದ
ಸದಾ ಹಸಮ್ಮುಖಿಗಳಾಗಿ ಕೋಪ ವರ್ಜಿತರಾಗಿ ಇರಬೇಕು. ಹೀಗಿರುವಾಗ ಮಾತೆ ವೈಭವಲಕ್ಷ್ಮಿಯು ತನ್ನ ಕೃಪಾ ಕಟಾಕ್ಷವನ್ನು ನಮ್ಮ ಮೇಲೆ ಬೀರುವುದು
ನಿಶ್ಚಯವಾಗಿದೆ.

ನಾರದ, ಪರಾಶರ, ಭ್ರಗು, ಅಗಸ್ಯ ಮುಂತಾದ ಮಹಾ ಮಹಿಮರು ಆಕೆಯನ್ನು ಪೂಜಿಸಿ ಧನ್ಯರಾದರು. ಶ್ರೀ ದೇವಿಯು ತನ್ನನ್ನು ನಂಬಿದ ಭಕ್ತರನ್ನು ಎಂದೆಂದಿಗೂ ಕೈ ಬಿಡುವುದಿಲ್ಲ. ಹೀಗಿರುವಾಗ ವೈಭವಲಕ್ಷ್ಮಿಯನ್ನು ತಪ್ಪದೆ ಪ್ರತಿ ಶುಕ್ರವಾರ ಸರಳವಾಗಿಯಾದರೂ ಪೂಜಿಸಿ ಧನ್ಯರಾಗೋಣ. 

ವೈಭವ ಲಕ್ಷ್ಮೀ ಪೂಜೆಗೆ ಅನುಭವವೇ ಆಧಾರವಾಗಿದೆ. ಪೂಜಾಕಾಲದಲ್ಲಿ ಅಚಾತುರ್ಯದಿಂದ ನಿರ್ಮಾಲ್ಯದೊಡನೆ ಹೊರಗೆಸೆದ ಉಂಗುರ ಒಬ್ಬ ಮುತ್ತೈದೆಗೆ ದೊರಕಿತು. ರೈಲಿನಲ್ಲಿ ಕಳೆದುಹೋದ ಹಣದಚೀಲ ಮತ್ತೆ ದೊರಕಿತು. ಖಾಸಗೀ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ದುರ್ದೆವದಿಂದ ಕೆಲಸ ಕಳೆದುಕೊಂಡವರಿಗೆ ಮೇಲಧಿಕಾರಿಗಳ ಕಿರುಕುಳ ತಪ್ಪಿ ಮರಳಿ ಉದ್ಯೋಗ ದೊರಕಿತು.

ವೈಭವಲಕ್ಷ್ಮೀ ಪೂಜೆಯನ್ನು ಮಾಡಿದ ಪ್ರಭಾವದಿಂದ ದಾವಣಗೆರೆಯ ಒಬ್ಬರಿಗೆ ವೇತನದಲ್ಲಿ ಸುಮಾರು ನಾಲ್ಕುನೂರು ರೂಪಾಯಿ ಬಡ್ತಿ ದೊರೆಯಿತು.
ಆರ್ಥಿಕ ತೊಂದರೆಯಿಂದ ಬೇಸತ್ತ ಮೈಸೂರಿನ ಅಂಚೆ ಇಲಾಖೆಯ ನೌಕರರೊಬ್ಬರಿಗೆ ಕೇವಲ 2 ಸಲ ಆತನ ಪತ್ನಿಯು ಪೂಜೆಯನ್ನು ಮಾಡಿದ ಪ್ರಭಾವದಿಂದ ಅಚಾನಕವಾಗಿ 2000 ರೂ. ಹಣ ದೊರೆತು ಮಗನಿಗೆ
ನೌಕರಿ ದೊರೆಯಿತು. ಅಪೆಂಡಿಸೈಟಿಸ್ ಕಾಯಿಲೆಯಿಂದ ನರಳುತ್ತಿದ್ದು ಸಾವನ್ನು ನಿರೀಕ್ಷಿಸಿದ್ದ
ಮಂಗಳೂರಿನ ಒಬ್ಬಾತನ ಪತ್ನಿಯು ಆಚರಿಸಿದ ವೈಭವಲಕ್ಷ್ಮೀ ಪೂಜಾ ಪ್ರಭಾವದಿಂದ ಅವರು ಸುಲಭ ಶಸ್ತ್ರ ಚಿಕಿತ್ಸೆಯಿಂದಲೇ ಆರೋಗ್ಯವಂತರಾಗಿ ಬದುಕುಳಿದರು. ಪತ್ರಿಕಾ ಕಛೇರಿಯಿಂದ ಅನ್ಯಾಯವಾಗಿ ವಜಾ ಮಾಡಲ್ಪಟ್ಟ ಹುಬ್ಬಳ್ಳಿಯ
ಶ್ರೀ ಘಳಗಿ ಎಂಬುವವರ ಪತ್ನಿಯು ಸ್ನೇಹಿತೆಯರ ಸಲಹೆಯಂತೆ ವೈಭವಲಕ್ಕಿಯನ್ನು ಪೂಜಿಸಿದರು. ಇದರಿಂದ ಬೇಗನೆ ಅವರಿಗೆ ಮತ್ತೆ ನೌಕರಿ ದೊರೆತು ಸುಖಿಗಳಾದರು. ಇನ್ನೋರ್ವ ಬೆಂಗಳೂರಿನ ಜಯನಗರದ ಭಕ್ತರ ಮಕ್ಕಳಿಗೆ ಈ ಪೂಜಾ ಪ್ರಭಾವದಿಂದ ಶೀಘ್ರ ವಿವಾಹ ನಿಶ್ಚಯವಾಗಿ
ಆರ್ಥಿಕ ತೊಂದರೆಯು ಪರಿಹಾರವಾಯಿತು. ಹೀಗೆ ಸಕಲ ಸಕಲ ಮನೋರಥಗಳನ್ನು ಪೂರೈಸುವ ಸಿರಿದೇವಿಯು ವೈಭವಲಕ್ಷಿಯಾಗಿ ನಂಬಿ ಪೂಜಿಸುವ ಭಕ್ತರಿಗೆ ಕಾಮಧೇನು, ಕಲ್ಪವೃಕ್ಷದಂತೆ ಬೇಡಿದ ಫಲಗಳನ್ನು ನೀಡುತ್ತಿದ್ದಾಳೆ.

ಪದ್ಮ ಪುರಾಣೋಕ್ತಿಯಂತೆ ಯಾವ ಮನೆಯಲ್ಲಿ ಅತಿಥಿಗಳಿಗೆ ಯಥಾ ಶಕ್ತಿ ಸತ್ಕಾರ ನಡೆಯುವುದೋ, ಪಿತೃಕಾರ್ಯ, ದೇವತಾ ಪೂಜೆ ಸದಾ ಸತ್ಯವನ್ನೇ
ಹೇಳುವುದು, ನುಡಿದಂತೆ ನಡೆಯುವುದು, ಗೋ ರಕ್ಷಣೆ, ಧಾನ್ಯ ಸಂಗ್ರಹ, ಕಲಹವಿಲ್ಲದ ಸಳ, ಪತಿಯೊಡನೆ ಹೊಂದಿಕೊಂಡು ವೈಮನಸ್ಯವಿಲ್ಲದೆ ಸದಾ ಹಸನ್ಮುಖಿಯಾದ ಗೃಹಿಣಿ ಇರುತ್ತಾಳೆಯೋ ಅಲ್ಲಿ ಲಕ್ಷ್ಮಿ ಭದ್ರವಾಗಿ ನೆಲೆಸುತ್ತಾಳೆ. ಈ ಮಾತು ಸ್ವಯಂ ಲಕ್ಷ್ಮೀದೇವಿಯ ಪತಿಯಾದ ಶ್ರೀಮನ್ನಾರಾಯಣನೇ
ಹೇಳಿದಾಗಿದೆ. ಇಂತಹ ಮಹಿಮಾನ್ವಿತವೂ ಪರಮ ಕರುಣಾ ಮೂರ್ತಿಯೂ ಆದ ಶ್ರೀ ಹರಿಯ ಪ್ರಿಯೆಯಾದ ವೈಭವಲಕ್ಷ್ಮೀ ಪೂಜೆಯಿಂದ ಭಕ್ತರೆಲ್ಲರೂ ಕೃತಾರ್ಥರಾಗಿ, ಸುಖ, ಸೌಭಾಗ್ಯ, ಮಾಂಗಲ್ಯ ಸಂಪತ್ತುಗಳನ್ನು ಪಡೆದು ಧನ್ಯರಾಗುತ್ತಾರೆ
ಎಂಬಲ್ಲಿಗೆ ವೈಭವಲಕ್ಷಿಯ ಮಹಿಮೆಯು ಸಂಪೂರ್ಣವಾಯಿತು.

ಕಳವು
ಆರತಿ ಬೆಳಗಿರೆ ವೈಭದಲಕ್ಮೀಗೆ | 
ಮಂಗಳ ಮಹತಾಯಿ ಶ್ರೀ ದೇವಿಗೆ |
ಚಿನ್ನಾದ ಹರಿವಾಣದಲ್ಲಿ ಓಕುಳಿಇಟ್ಟು | 
ಆರತಿ ಬೆಳಗಿರೆ ಶ್ರೀಲಕ್ಷ್ಮೀಗೆ || ೧ ||

ಮಂದಿರದೊಳು ಧನಧಾನ್ಯ ದೈರಿಸಿಯಿರಲಿ |
ಮನೆಮಂದಿಗೆಲ್ಲಾ ಸುಖಸೌಭಾಗ್ಯ ಬರಲಿ |
ಮಂದರಧರ ಶ್ರೀ ಕೃಷ್ಣನ ರಮಣಿಯು | 
ಬಂದಿಲ್ಲಿ ಆರತಿ ಸ್ವೀಕರಿಸಲಿ || ೨ ||

ಜಯ ಜಯವೆನ್ನಿರಿ ಜಯಲಕ್ಷ್ಮೀಗೆ | 
ಜಯ ಜಯವೆನ್ನಿರಿ ವೈಭವಲಕ್ಷ್ಮೀಗೆ ||
ಭಯವೆಲ್ಲಾ ದೂರವಾಗಿ ಜಯಸಿಗಲೆಮಗಂದು |
ಆರತಿ ಬೆಳಗಿರಿ ವೈಭವ ಲಕುಮಿಗೆ || ೩ ||

(ಕೈ ಜೋಡಿಸಿ)
ದೇವಿ ದೇಹಿ ಪರಂ ಜ್ಞಾನಂ ದೇವಿ ದೇಹಿ ಪರಂ ಸುಖಂ |
ದೇವಿ ದೇಹಿ ಯಶೋ ದೇಹಿ ಮಾಂಗಲ್ಯಂ ದೇಹಿ ಮೇ ಶುಭೇ ||

|| ವೈಭವಲಕ್ಷ್ಮೀ ದೇವೈ ನಮಃ- ನೈವೇದ್ಯಂ ಸಮರ್ಪಯಾಮಿ ||
ಎಂದು ನೈವೇದ್ಯವನ್ನು ಅರ್ಪಿಸುವುದು

ಪದ್ಮಾಸನೇ ಪದ್ಮಕರೇ ಸರ್ವಲೋಕೈಕ ಪೂಜಿತೇ |
ನಾರಾಯಣ ಪ್ರಿಯೇ ದೇವಿ ಸುಪ್ರೀತಾಭವ ಸರ್ವದಾ ||
|| ಶ್ರೀ ಲಕ್ಷ್ಮೀನಾರಾಯಣ ಪ್ರಸಾದ ಸಿದ್ದಿರಸ್ತು ||
ಎಂದು ನಮಸ್ಕರಿಸಿ ಲಕ್ಷ್ಮೀ ಪ್ರಸಾದದ ಹೂವನ್ನು ತಲೆಯಲ್ಲಿ ಮುಡಿದು ಮುತ್ತೈದೆಯರಿಗೂ ನೀಡುವುದು.

ಭದ್ರಂ-ಶುಭಂ-ಮಂಗಳಂ

ವೈಭವಲಕ್ಷ್ಮೀ ಪೂಜಾ ಆಚರಣೆ
ಈ ಪುಸ್ತಕದ ಒಂದು ಪ್ರತಿಯನ್ನು ಒಬ್ಬ ಮುತೈದೆಗೆ ದಾನ ಕೊಟ್ಟು ಆಶೀರ್ವಾದ ಪಡೆಯಿರಿ. ಅಷ್ಟಲಕ್ಷ್ಮೀ ರೂಪಿಯಾದ ಮಹಾಲಕ್ಷ್ಮಿಯು ಕೃಪಾಕಟಾಕ್ಷಸಿದ್ದಿಗಾಗಿ ಎಂಟು ಜನ ಮುತ್ತೈದೆಯರಿಗೆ ದಾನ ನೀಡುವುದರಿಂದ
ಲಕ್ಷಿಯ ಪೂರ್ಣಾನುಗ್ರಹ ದೊರೆಯುತ್ತದೆ ಎಂಬುದು ಅನುಭವದ ಮಾತು.

ದಾನ ಶ್ಲೋಕ :
ದೇವಿ ದೇಹಿ ಪರಂ ಜ್ಞಾನಂ ದೇವಿ ದೇಹಿ ಪರಂ ಸುಖಂ
ಧನಂ ದೇಹಿ ಯಶೋ ದೇಹಿ ಕಾಮಂ ಮೋಕ್ಷಂಚ ದೇಹಿ ಮೇ ||
ಎಂದು ಪ್ರಾರ್ಥಿಸಿ ಮುತ್ತೈದೆಯರಿಗೆ ಈ ಪುಸ್ತಕ ಹಾಗೂ ತಾಂಬೂಲ ನೀಡಿ ನಮಸ್ಕರಿಸಿ ಆಶೀರ್ವಾದ ಪಡೆದು ಸಂಪತ್ತು, ಅಭಿವೃದ್ಧಿಯನ್ನು ಪಡೆಯಿರಿ.

|| ಶ್ರೀ ವೈಭವಲಕ್ಷ್ಮೀ ಪ್ರಸಾದ ಸಿದ್ದಿರಸ್ತು ||
ಶ್ರೀ ವೈಭವ ಲಕ್ಷ್ಮೀ ರಂಗೋಲಿ
ಈ ರಂಗೋಲಿಯನ್ನು ಲಕ್ಷ್ಮೀ ಚಿತ್ರಪಟದ ಮುಂದೆ ಸುಣ್ಣದಿಂದ ಬರೆದು ಮಧ್ಯೆ ಕುಂಕುಮದ ಬೊಟ್ಟನ್ನು ಇಟ್ಟು ಅರಿಸಿನದಿಂದ ಸುತ್ತಲೂ ರಂಗೋಲಿ ಹಾಕಿದರೆ ತುಂಬಾ ಉತ್ತಮ ಫಲ ದೊರೆಯುತ್ತದೆ.

Popular posts from this blog

ಸುಖಕರ್ತ ದುಖಹರ್ತ / सुखकर्ता दुखहर्ता

ಆತ್ಮಾರಾಮ ಆನಂದ ರಮಣ / athma Rama Aanandha Ramana

ಮಂತ್ರ ಪುಷ್ಪಂ / Mantra Pushpam